Wednesday 23 November 2011

ಅಕ್ಕಿ ಗಿರಣಿಗಳ ರಾಜಧಾನಿ ತುಮಕೂರು


ಒಂದು ಕಾಲಕ್ಕೆ ಮಂಡ್ಯ, ಗಂಗಾವತಿ ರೀತಿಯಲ್ಲಿ ಭತ್ತದ ಬೆಳೆಗೆ ಹೆಸರಾಗಿದ್ದ ತುಮಕೂರು ಜಿಲ್ಲೆಯಲ್ಲಿ ಈಗ ಭತ್ತದ ಬೆಳೆ ಎಂದರೆ ಕೇವಲ ಕೃಷಿ ಪ್ರಾತ್ಯಕ್ಷಿಕೆಯಂತಾಗಿದೆ. ಹಿಂದಿನ ಭತ್ತದ ಬೆಳೆಯ ವೈಭವ ಇಲ್ಲಿ ಈಗ ಇಲ್ಲದಿದ್ದರೂ ಇದನ್ನು ಆಧರಿಸಿದ್ದ ರೈಸ್‌ಮಿಲ್‌ಗಳಿಗೆ (ಅಕ್ಕಿ ಗಿರಣಿ) ಮಾತ್ರ ಕೊರತೆ ಇಲ್ಲ. ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಅಕ್ಕಿ ಗಿರಣಿಗಳನ್ನು ಹೊಂದಿದೆ.

ತುಮಕೂರು ನಗರ ಬೆಂಗಳೂರಿಗೆ ಹೆಚ್ಚು ಸಮೀಪವಾಗಿರುವುದು ಜಿಲ್ಲೆಯಲ್ಲಿ ಅಕ್ಕಿ ಗಿರಣಿಗಳ ಹೆಚ್ಚಳಕ್ಕೆ ಪ್ರಮುಖ ಕಾರಣ. ಅಕ್ಕಿಗೆ ಬೆಂಗಳೂರು ಪ್ರಮುಖ ಮಾರುಕಟ್ಟೆಯೂ ಹೌದು. ಇನ್ನೊಂದು ಅಂಶವೆಂದರೆ ಇಲ್ಲಿನ ಸಹಕಾರಿ ಕ್ಷೇತ್ರದ ಬ್ಯಾಂಕ್‌ಗಳು ಅಕ್ಕಿ ಗಿರಣಿ ಉದ್ಯಮಕ್ಕೆ ಸಾಲ ನೀಡಿಕೆಯಲ್ಲಿ ಪ್ರಥಮ ಆದ್ಯತೆ ನೀಡುತ್ತಿರುವುದು ಈ ಉದ್ಯಮದ ಬೆಳವಣಿಗೆಗೆ ಕಾರಣವಾಗಿದೆ.
ಎರಡು ದಶಕಗಳ ಹಿಂದೆ ಪಾವಗಡ ಹೊರತುಪಡಿಸಿ ಜಿಲ್ಲೆಯ ಒಂಬತ್ತು (9) ತಾಲ್ಲೂಕುಗಳಲ್ಲಿ ಹೇರಳವಾಗಿ ಭತ್ತ ಬೆಳೆಯಲಾಗುತ್ತಿತ್ತು. ಮಳೆಯ ನಿರಂತರ ವೈಫಲ್ಯ, ಭತ್ತದ ಬೆಳೆಗೆ ಅಗತ್ಯವಾದ ನೀರಿನ ಕೊರತೆ, ಸಾವಿರಾರು ಅಡಿ ಕೊರೆದರೂ ಲಭ್ಯವಾಗದ ನೀರು ಮುಂತಾದ ಸಮಸ್ಯೆಗಳು ಜಿಲ್ಲೆಯಲ್ಲಿ ಭತ್ತದ ಬೆಳೆಯಿಂದ ರೈತರು ವಿಮುಖರಾಗುವಂತೆ ಮಾಡಿದವು. ಕಳೆದ ಐದಾರು ವರ್ಷಗಳಲ್ಲಿ ಹೇಮಾವತಿ ನೀರಿನ ಆಸರೆ ಇರುವ ತುರುವೇಕೆರೆ, ಗುಬ್ಬಿ, ಕುಣಿಗಲ್, ಭಾಗಶಃ ತುಮಕೂರು ತಾಲ್ಲೂಕುಗಳಲ್ಲಿ ಮಾತ್ರ ಭತ್ತದ ಬೆಳೆಯಾಗುತ್ತಿತ್ತು. ಹೆಚ್ಚು ಭತ್ತ ಬೆಳೆಯುವ ಈ ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ಒಂದೂವರೆ ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ವಾರ್ಷಿಕ ಸುಮಾರು ಐದು ಸಾವಿರ ಟನ್ ಭತ್ತದ ಉತ್ಪಾದನೆಯಾಗುತ್ತಿದೆ.
ಇದರಲ್ಲಿ ಅರ್ಧದಷ್ಟು ರೈತರ ಸ್ವಯಂ ಬಳಕೆಗೆ ಹಾಗೂ ಸ್ಥಳೀಯ ಬೇಡಿಕೆಗಳಿಗೆ ಪೂರೈಕೆಯಾದರೆ ಮಾರುಕಟ್ಟೆಗೆ ಅಥವಾ ಅಕ್ಕಿ ಗಿರಣಿಗಳಿಗೆ ಪೂರೈಕೆಯಾಗುವ ಭತ್ತದ ಪ್ರಮಾಣ ಶೇಕಡಾ 10 ರಷ್ಟು ಮಾತ್ರ. ಆದರೂ ಜಿಲ್ಲೆಯಲ್ಲಿ ಅಕ್ಕಿ ಗಿರಣಿ ಉದ್ಯಮ ವ್ಯಾಪಕವಾಗಿ ಬೆಳೆದಿರುವುದು ವಿಶೇಷವಾಗಿದೆ.
ತುಮಕೂರು ನಗರವೊಂದರಲ್ಲೆೀ 80 ಅಕ್ಕಿ ಗಿರಣಿಗಳಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಅಕ್ಕಿ ಗಿರಣಿಗಳು ಸೇರಿದಂತೆ 105 ಅಕ್ಕಿ ಗಿರಣಿಗಳನ್ನು ಒಳಗೊಂಡು ರಾಜ್ಯದಲ್ಲಿಯೇ ತುಮಕೂರು ಮುಂಚೂಣಿಯಲ್ಲಿದೆ. ಚಾಲ್ತಿಯಲ್ಲಿರುವ ಅಕ್ಕಿ ಗಿರಣಿಗಳ ಪೈಕಿ ಅರ್ಧದಷ್ಟು ಮಿಲ್‌ಗಳು ಕಳೆದ ಒಂದು ದಶಕದಲ್ಲಿ ಅಸ್ತಿತ್ವಕ್ಕೆ ಬಂದಿರುವುದು ಇಲ್ಲಿನ ರೈಸ್‌ಮಿಲ್ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಸ್ವಾತಂತ್ರ್ಯ ಪೂರ್ವದಿಂದಲೂ ಅಕ್ಕಿ ಗಿರಣಿ ಉದ್ಯಮ ಇಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಈಚೆಗೆ ಜಿಲ್ಲೆಯಲ್ಲಿ ಭತ್ತದ ಉತ್ಪನ್ನ ಕಡಿಮೆಯಾಗಿದ್ದರೂ ಭತ್ತವನ್ನು ಆಮದು ಮಾಡಿಕೊಂಡೇ ಉದ್ಯಮ ಅದ್ಭುತವಾಗಿ ಬೆಳೆದಿರುವುದು ವಿಸ್ಮಯವೇ ಸರಿ. ಇದಕ್ಕೆಲ್ಲಾ ತುಮಕೂರು ನಗರಕ್ಕೆ ರಾಜಧಾನಿ ಬೆಂಗಳೂರು ಕೇವಲ 70 ಕಿ.ಮೀ. ಸಮೀಪದಲ್ಲಿರುವುದೇ ಪ್ರಮುಖ ಕಾರಣ.
ದೂರದ ರಾಯಚೂರು, ಗಂಗಾವತಿ, ಕೊಪ್ಪಳ, ಬೆಳಗಾವಿ, ಮಂಡ್ಯ ಇಲ್ಲೆಲ್ಲಾ ವ್ಯಾಪಕವಾಗಿ ಭತ್ತ ಬೆಳೆದರೂ ಮಾರುಕಟ್ಟೆಯ ಕೊರತೆಯಿಂದ ಉತ್ಪನ್ನದ ಪ್ರಮಾಣಕ್ಕೆ ಅನುಗುಣವಾಗಿ ರೈಸ್‌ಮಿಲ್‌ಗಳು ಬೆಳವಣಿಗೆಯಾಗಿಲ್ಲ. ಇದನ್ನು ಅರಿತಿರುವ ತುಮಕೂರು ಜಿಲ್ಲೆಯ ಉದ್ಯಮಿಗಳು ಅಪಾರ ಅಕ್ಕಿ ಬೇಡಿಕೆ ಇರುವ ಬೆಂಗಳೂರು ನಗರವನ್ನು ಗುರಿಯಾಗಿಸಿಕೊಂಡು ಇಲ್ಲಿ ಅಕ್ಕಿ ಗಿರಣಿ ಉದ್ಯಮದಲ್ಲಿ ಆಸಕ್ತಿ ತಳೆದಿದ್ದಾರೆ.
ಬೆಂಗಳೂರು ನಗರಕ್ಕೆ ದಿನ ಒಂದಕ್ಕೆ ಸರಾಸರಿ 4000 ಟನ್ ಅಕ್ಕಿ ಅಗತ್ಯವಿದೆ. ಈ ಪೈಕಿ ನಿತ್ಯ 1600 ಟನ್ ಅಕ್ಕಿಯನ್ನು ತುಮಕೂರಿನ ಗಿರಣಿಗಳೇ ಪೂರೈಸುತ್ತಿವೆ. ಮಿಲ್‌ಟೆಕ್, ಜಪಾನ್‌ನ ಬುಲ್ಲರ್, ಸಟಾಕಿ ಯಂತ್ರಗಳನ್ನು ಅಳವಡಿಸಿಕೊಂಡು ಇಲ್ಲಿನ ಮಿಲ್‌ಗಳು ಆಧುನೀಕರಣಗೊಂಡಿವೆ.
ಕ್ಲೀನಿಂಗ್ ಹಂತದಿಂದ ಹಿಡಿದು ಭತ್ತವನ್ನು ಬೇಯಿಸುವ, ಹೊಟ್ಟನ್ನು ತೆಗೆಯುವ ಅಕ್ಕಿಯನ್ನು ಅಗತ್ಯಕ್ಕೆ ಅನುಗುಣವಾದ ಸಣ್ಣ ಮತ್ತು ದೊಡ್ಡ ಗಾತ್ರದಲ್ಲಿ ಪಾಲಿಷ್ ಮಾಡಿ ವಿಂಗಡಿಸುವ ಮುಂತಾದ ಎಲ್ಲವೂ ಕ್ರಿಯೆಗಳೂ ಆಧುನಿಕರಣಗೊಂಡಿವೆ. ಇಲ್ಲಿನ ಎಲ್ಲಾ ಮಿಲ್‌ಗಳಿಂದ ಪ್ರತಿದಿನ ಸರಾಸರಿ 213 ಟನ್‌ಗಳಿಗೂ ಅಧಿಕ ಪಾಲಿಷ್ ತೌಡು ಉತ್ಪಾದನೆಯಾಗುತ್ತಿದ್ದು, ಈ ತೌಡಿನಿಂದ ಖಾದ್ಯ ತೈಲ ಸಂಸ್ಕರಿಸಲಾಗುತ್ತದೆ. ಇದನ್ನು ಅವಲಂಬಿಸಿಯೇ ಇಲ್ಲಿ ಐದು ಆಯಿಲ್ ಎಕ್ಸ್‌ಟ್ರಾಕ್ಷನ್ ಕಾರ್ಖಾನೆಗಳು ನಡೆಯುತ್ತಿವೆ.
ಬೇರೆ ಬೇರೆ ಗಾತ್ರದಲ್ಲಿ ವಿಂಗಡಣೆಯಾಗಿ ಬರುವ ಅಕ್ಕಿ ಮತ್ತು ನುಚ್ಚು ದೊಡ್ಡ ಪ್ರಮಾಣದಲ್ಲಿ ಪೌಲ್ಟ್ರಿ (ಕೋಳಿ ಸಾಗಾಣಿಕೆ) ಉದ್ಯಮಕ್ಕೆ ಪೂರೈಕೆಯಾಗುತ್ತಿದೆ. ಹೀಗೆ ವಿವಿಧ ಸ್ಥರದಲ್ಲಿ ವಿಸ್ತಾರವಾಗಿ ಬೆಳೆಯುತ್ತಿರುವ ಈ ಉದ್ಯಮದ ವಿಕಾಸಕ್ಕೆ ಇಲ್ಲಿ ವಿಪುಲ ಅವಕಾಶವಿದೆ. ಸುತ್ತಮುತ್ತಲಿನ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕರಿಗೆ ಈ ರೈಸ್‌ಮಿಲ್‌ಗಳು ತಕ್ಷಣದ ಉದ್ಯೋಗಗಳನ್ನು ಒದಗಿಸುತ್ತಿದ್ದು, ಸಹಸ್ರಾರು ಕಾರ್ಮಿಕರಿಗೆ ತುತ್ತಿನ ಚೀಲಕ್ಕೆ ನೆರವಾಗಿದೆ.
ತುಮಕೂರಿನ ಎಲ್ಲ ರೈಸ್‌ಮಿಲ್‌ಗಳಿಗೆ ಪ್ರತಿದಿನ ಸರಾಸರಿ 2670 ಟನ್ ಭತ್ತದ ಅಗತ್ಯವಿದೆ. ಇಷ್ಟು ಪ್ರಮಾಣದ ಭತ್ತದ ಮಿಲ್ಲಿಂಗ್ ನಿಂದ 1600 ಟನ್ ಅಕ್ಕಿ (ಶೇ.60ರಷ್ಟು), 213 ಟನ್ ತೌಡು (ಶೇ.8), 187 ಟನ್ ನುಚ್ಚು ಶೇ.7), 400 ಟನ್ ಉಮಿ (ಅಸ್ಕ್) ದೊರೆಯುತ್ತದೆ. ಇಷ್ಟು ಭತ್ತದ ಹಣಕಾಸು ವಹಿವಾಟು ಸರಾಸರಿ ಒಂದೂವರೆ ಕೋಟಿ ರೂಪಾಯಿ.

ಸಮಸ್ಯೆಗಳೂ ಇವೆ
ರೈಸ್ ಮಿಲ್ ಉದ್ಯಮದ ಈ ಸಾಧನೆ ಜತೆಗೆ ತನ್ನದೇ ಆದ ಸಂಕಷ್ಟಗಳು ಹಾಗೂ ಸವಾಲುಗಳನ್ನು ಎದುರಿಸುತ್ತಿದೆ ಎನ್ನುತ್ತಾರೆ ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಭಗವತಿ ಭಗವಾನ್ ರೈಸ್ ಇಂಡಸ್ಟ್ರೀಸ್‌ನ ಮಾಲೀಕ ಆರ್.ಎಲ್. ರಮೇಶ್‌ಬಾಬು.
ಪ್ರತಿದಿನ 18 ಗಂಟೆ ಮೂರು ಫೇಸ್‌ನಲ್ಲಿ ಪೂರ್ಣ ಪ್ರಮಾಣದ ವಿದ್ಯುತ್ ಅಗತ್ಯವಿದೆ. ಲೋಡ್‌ಶೆಡ್ಡಿಂಗ್ ಮತ್ತಿತರ ಸಮಸ್ಯೆಗಳಿಂದ ವಿದ್ಯುತ್ ಇರಲ್ಲ. ಈ ಉದ್ಯಮ ಮಾರುಕಟ್ಟೆ ಉದ್ಯಮದ ಏರಿಳಿತವನ್ನು ಅವಲಂಬಿಸಿರುವುದರಿಂದ ಕಾರ್ಮಿಕರನ್ನು ಕಾಯಂ ಆಗಿ ನೇಮಿಸಿಕೊಳ್ಳುವುದು ಕಷ್ಟಸಾಧ್ಯ. ಈ ಕಾರಣದಿಂದ ನುರಿತ ಕಾರ್ಮಿಕರ ಸಮಸ್ಯೆ ನಿತ್ಯದ ಗೋಳು.
ಇದರೊಂದಿಗೆ ಸರಕಾರ ನಿಗದಿಪಡಿಸಿದ ಲೇವಿ ಪದ್ಧತಿ ರೈಸ್ ಮಿಲ್‌ಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಲೇವಿಯಲ್ಲಿನ ಪ್ರಮಾಣವನ್ನು ಪರಿಷ್ಕರಿಸುವ ಅಗತ್ಯವಿದೆ. ಸಣ್ಣ ರೈಸ್ ಮಿಲ್‌ಗಳಿಗೆ ಉಗ್ರಾಣದ ಕೊರತೆ ಇದ್ದು, ಇಡೀ ಉದ್ಯಮಕ್ಕೆ ಪೂರಕವಾಗುವಂತೆ ಸಾರ್ವತ್ರಿಕ ಉಗ್ರಾಣದ ಅವಶ್ಯಕತೆ ಇದೆ.
ಸಂಕಷ್ಟದ ಜತೆಗೇ ಉದ್ಯಮ ಬೆಳೆಯುತ್ತಿದೆ. ಜೊತೆಗೆ ಜಿಲ್ಲಾಡಳಿತ ಕೈಗೊಳ್ಳುವ ಸಾರ್ವಜನಿಕ ಉಚಿತ ಆರೋಗ್ಯ ಶಿಬಿರ, ಸಾಹಿತ್ಯ ಸಮ್ಮೇಳನ, ಸರಕಾರಿ ನೌಕರರ ಸಮಾವೇಶಗಳಿಗೆ, ಸಂಘ ಸಂಸ್ಥೆಗಳು, ಮಠಗಳು ಆಯೋಜಿಸುವ ಉಚಿತ ಸಾಮೂಹಿಕ ವಿವಾಹ ಸಮಾರಂಭ, ಧಾರ್ಮಿಕ ಕಾರ್ಯಗಳಿಗೆ ಉಚಿತವಾಗಿ ಅಕ್ಕಿ ಒದಗಿಸುವ ಔದಾರ್ಯದ ಕೆಲಸವನ್ನೂ ಮಾಡುತ್ತಿವೆ.

Tuesday 22 November 2011

ನಗರದ ರಸ್ತೆಗಳಲ್ಲಿ ಕ್ಯಾಮರಾ ಕಣ್ಣು


ತುಮಕೂರು: ಸಂಚಾರಿ ವ್ಯವಸ್ಥೆ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರದ ರಸ್ತೆಗಳಿಗೆ ಗುಪ್ತ ವಿಡಿಯೋ ಕ್ಯಾಮರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಮೆಟ್ರೋ ಪಾಲಿಟಿನ್ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ವ್ಯವಸ್ಥೆ ಇನ್ನು ಕೆಲವೇ ತಿಂಗಳಲ್ಲಿ ನಗರದ ಪ್ರಮುಖ ರಸ್ತೆಗಳಲ್ಲೂ ಕಂಡುಬರಲಿದೆ.

ವಿಡಿಯೋ ಕ್ಯಾಮೆರಾಗಳು ರಸ್ತೆಯಲ್ಲಿ ಸಾಗುವ ಎಲ್ಲರನ್ನು ಸಂಪೂರ್ಣ ಸೆರೆ ಹಿಡಿಯಲಿವೆ. ಪ್ರಮುಖ ರಸ್ತೆಗಳಲ್ಲಿ ಅಳವಡಿಸುವ ಈ ಗುಪ್ತ ವಿಡಿಯೋ ಕ್ಯಾಮೆರಾಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದು, ಪೊಲೀಸರಿಗೆ ನಗರ ಸ್ಥಿತಿಗತಿ ಬಗ್ಗೆ ಗಮನ ಹರಿಸಲು ಸುಲಭವಾಗಲಿದೆ.

ಇಂಥ ವಿಡಿಯೋ ಕ್ಯಾಮೆರಾ ವ್ಯವಸ್ಥೆ ಬೆಂಗಳೂರು, ಮುಂಬೈನಂಥ ನಗರಗಳಲ್ಲಿ ಸಾಮಾನ್ಯ. ಆದರೆ ಈಗ ತುಮಕೂರಿಗೂ ಈ ವ್ಯವಸ್ಥೆ ಬರುತ್ತಿದೆ. ರಾಜಧಾನಿಗೆ ಹತ್ತಿರ ಇರುವ ನಗರ, ಭವಿಷ್ಯದ ಬೆಂಗಳೂರಿನ ಉಪ ನಗರಿ ಎಂದೇ ಗುರುತಿಸಿಕೊಂಡಿರುವ ತುಮಕೂರು ನಗರ ಕೆಲವೇ ದಿನಗಳಲ್ಲಿ ಮಹಾನಗರ ಪಾಲಿಕೆಯಾಗಲಿದೆ.

ಅಲ್ಲದೆ ಕಳೆದ ಕೆಲವು ವರ್ಷಗಳಿಂದೀಚೆಗೆ ನಾಗಾಲೋಟದಲ್ಲಿ ನಗರ ಬೆಳೆಯುತ್ತಿದ್ದು, ವಾಹನ ದಟ್ಟಣೆ, ಕಳ್ಳತನ ಮತ್ತಿತರ ಸಮಾಜಘಾತುಕ ಘಟನೆಗಳು ಕೂಡ ಹೆಚ್ಚಿವೆ. ರಸ್ತೆಗೆ ವಿಡಿಯೋ ಕ್ಯಾಮರಾ ಬಂದ ನಂತರ ಇಂಥ ಘಟನೆಗಳಿಗೆ ತಡೆ ಬೀಳಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಗರ ಭದ್ರತಾ ಮೂಲಸೌಕರ್ಯ ಯೋಜನೆಯಡಿ ವಿಡಿಯೋ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದರಿಂದಾಗಿ ರಸ್ತೆಯಲ್ಲಾಗುವ ವಿವಿಧ ಬಗೆಯ ಅಪಘಾತಗಳು, `ಇಟ್ ಅಂಡ್ ರನ್ ಕೇಸ್` ಮುಂತಾದವನ್ನು ಸುಲಭವಾಗಿ ಕಂಡು ಹಿಡಿಯಬಹುದಾಗಿದೆ. ಅಲ್ಲದೇ ರಸ್ತೆ ನಿಯಮ ಪಾಲನೆ ಮಾಡದವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಆರ್.ಸುರೇಶ್ `ಪ್ರಜಾವಾಣಿ`ಗೆ ತಿಳಿಸಿದರು.

ಸಂಚಾರ ಸುವ್ಯವಸ್ಥೆ ಮಾತ್ರವಲ್ಲದೆ ನಗರದಲ್ಲಿ ಈಚೆಗೆ ಹೆಚ್ಚುತ್ತಿರುವ ಮನೆ, ಸರ ಕಳ್ಳತನ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ವಿಡಿಯೋ ಕ್ಯಾಮೆರಾ ಅಳವಡಿಸುವುದರಿಂದ ಬಹುತೇಕ ಸರಗಳ್ಳರನ್ನು ಹಿಡಿಯುವುದು ಸುಲಭವಾಗಲಿದೆ. ಅವ್ಯವಸ್ಥಿತ ಸಂಚಾರ ವ್ಯವಸ್ಥೆ ಕೂಡ ತಹಬದಿಗೆ ಬರಲಿದೆ ಎನ್ನಲಾಗಿದೆ.

ಮೊದಲ ಹಂತವಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬಿ.ಎಚ್.ರಸ್ತೆ, ಗುಬ್ಬಿ ಗೇಟ್, ಎಂ.ಜಿ.ರಸ್ತೆ, ಎಸ್.ಎಸ್.ಪುರಂ ಸೇರಿದಂತೆ ನಗರದ ನೂರಕ್ಕೂ ಹೆಚ್ಚು ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ. ಯೋಜನೆಗೆ ಹಣಕಾಸಿನ ತೊಂದರೆ ಇಲ್ಲ.

ಈಗಾಗಲೇ ಪೊಲೀಸ್ ಇಲಾಖೆ ಕ್ಯಾಮೆರಾ ಅಳವಡಿಸಲು ಬೇಕಾಗಿರುವ ಸ್ಥಳಗಳನ್ನು ಗುರುತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ನಗರದ ಎಲ್ಲ ಕಡೆ ಅಳವಡಿಸಲಾಗುವ ಕ್ಯಾಮೆರಾಗಳನ್ನು ಪೊಲೀಸ್ ಕಂಟ್ರೋಲ್ ರೂಂನಲ್ಲಿ ಇಡಲಾಗುವ ಸರ್ವರ್‌ಗೆ ಸಂಪರ್ಕ ಕಲ್ಪಿಸಲಾಗುತ್ತದೆ.
ಯಾವುದೇ ರಸ್ತೆಯಲ್ಲಿ ಏನೇ ಘಟಿಸಿದರೂ ಕಂಟ್ರೋಲ್ ರೂಂನಲ್ಲಿ ಕುಳಿತೇ ವೀಕ್ಷಿಸಬಹುದು. ಅಲ್ಲದೇ ಕಳ್ಳತನ ನಡೆದ ಸಂದರ್ಭದಲ್ಲಿ ಆ ವ್ಯಕ್ತಿ ಯಾವ ರಸ್ತೆಯಲ್ಲಿ ಹೋದನು ಎಂಬುದನ್ನು ವಿಡಿಯೋದಲ್ಲಿ ನೋಡಿಕೊಂಡು ಕೂಡಲೇ ಕಾರ್ಯಪ್ರವೃತ್ತರಾಗಬಹುದು ಎಂದು ಮೂಲಗಳು ಹೇಳಿವೆ.

ಸರ್ಕಾರಿ ಶಾಲೆಗೆ ಜೀವ ತಂದ ಶಿಕ್ಷಕ

ಈಗ ಸರ್ಕಾರಿ ಶಾಲೆ ಮುಚ್ಚುವ ಸುದ್ದಿಯದೇ ಚರ್ಚೆ. ಆದರೆ ಚಿಕ್ಕನಾಯಕನಹಳ್ಳಿ ಸಮೀಪದ ಗೊಲ್ಲರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ಮಾಡಿದ ಪವಾಡ ಮುಚ್ಚುವ ಶಾಲೆ ನಳನಳಿಸುವಂಥಾಗಿದೆ. ಸರ್ಕಾರಿ ಶಾಲೆಯಲ್ಲಿ ಇಂಥ ಶಿಕ್ಷಕರಿದ್ದಿದ್ದರೆ ಇಂದು ಶಾಲೆಗಳನ್ನು ಮುಚ್ಚುವ ಮಾತುಗಳೇ ಬರುತ್ತಿರಲಿಲ್ಲವೇನೋ?

50 ವರ್ಷಗಳ ಹಿಂದೆ ಈ ಹಳ್ಳಿಯಲ್ಲಿ ಮಾನವ ಶ್ರಮ ಬಳಸಿ ಗಣಿಗಾರಿಕೆ ನಡೆಸುತ್ತಿದ್ದಾಗ ಕೆಲವು ಕುಟುಂಬಗಳು ನೆಲೆ ನಿಂತವು. ಈಗ ಇದು 70 ಮನೆಗಳ ಸಣ್ಣ ಊರು. ಇಲ್ಲಿ ಮಕ್ಕಳಿದ್ದರೂ ಶಾಲೆಗೆ  ಬರುತ್ತಿರ ಲಿಲ್ಲ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಗಮನ ಕೊಡುತ್ತಿರಲಿಲ್ಲ.  ಮಕ್ಕಳಿಲ್ಲ ಎಂದು ಇನ್ನೇನು ಮುಚ್ಚುವ ಹಂತ ದಲ್ಲಿದ್ದ ಈ ಪ್ರಾಥಮಿಕ ಶಾಲೆಗೆ 1995ರಲ್ಲಿ ಶಿಕ್ಷಕರಾಗಿ ಶಿವಶಂಕರ್ ಬಂದರು.

ಶಿವಶಂಕರ್ ಈ ಶಾಲೆಗೆ ಬಂದಾಗ ಮುರಿದುಬಿದ್ದ ಶಾಲಾಕಟ್ಟಡ, ಮಳೆ ಬಂದರೆ ಆಶ್ರಯಕ್ಕೂ ಪರದಾಡು ವಂತಹ ಚೋಪಡಿ. ಕಪ್ಪು ಹಲಗೆ ಯಾಗಲಿ, ಖುರ್ಚಿ, ಟೇಬಲ್‌ಗಳಾಗಲಿ ಒಂದೂ ಇರಲಿಲ್ಲ.  ಶಾಲಾ ಮಾರ್ಗದಲ್ಲಿ ಬಂದರೆ ಗಣಿ ದೂಳಿನ ಸ್ನಾನ. ಶಾಲೆಯಲ್ಲಿ ಕೇವಲ 6 ಮಕ್ಕಳು! ಅರ್ಧದಲ್ಲೇ ಶಾಲೆ ಬಿಟ್ಟ ಮಕ್ಕಳೇ ಹೆಚ್ಚು.

ತಮಿಳು ಮಾತೃಭಾಷೆಯ ಈ ಮಕ್ಕಳಿಗೆ ಕನ್ನಡ ಕಲಿಸುವುದಿರಲಿ ಶಾಲೆಗೆ ಕರೆತರುವುದೇ ಕಷ್ಟವಾಗಿತ್ತು. ಪೋಷಕರಿಗೆ ಶಾಲಾ ಶಿಕ್ಷಕರ ಅರಿವು ಮೂಡಿಸಲು ಹೋದರೆ ಇವರ ಮಾತುಗಳನ್ನೇ ಕೇಳುತ್ತಿರಲಿಲ್ಲ. ಆದರೆ ಹತ್ತು ವರ್ಷದ ಬಳಿಕ ಶಾಲೆಯ ಪರಿಸರವೇ ಬದಲಾಯಿತು. ಇದಕ್ಕೆ ಕಾರಣ ಈ ಶಿಕ್ಷಕ.

ಸರ್ವ ಶಿಕ್ಷಣ ಅಭಿಯಾನದಲ್ಲಿ ಶಾಲೆಗೆ ಉತ್ತಮ ಕಟ್ಟಡ ಬಂದಿದೆ. ಪೀಟೋಪಕರಣ, ಪಾಠೋಪಕರಣದ ವ್ಯವಸ್ಥೆ ಇದೆ. ಮಕ್ಕಳಲ್ಲಿ ಶಿಸ್ತು ಇದೆ. ಯಾವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರೂ ಈಗ ಅದೇ ಪೋಷಕರು ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದಾರೆ.

ಶಾಲೆಯಲ್ಲಿ ಆಕರ್ಷಕ  ಕೈತೋಟ, ನೀರಿನ ವ್ಯವಸ್ಥೆ , ಗ್ರಂಥಾಲಯ, ವಿಶಾಲವಾದ ಆಟದ ಮೈದಾನ, ಪ್ರಯೋಗಶಾಲೆ, ಕಂಪ್ಯೂಟರ್, ಧ್ವನಿವರ್ಧಕ, ಹಾಗೂ ಮಕ್ಕಳಿಗೆ ಕಾನ್ವೆಂಟ್ ಮಾದರಿಯಲ್ಲಿ ಸಮವಸ್ತ್ರ, ಶೂ, ಟೈ , ಬ್ಯಾಗು, ಹಾಗೂ ಉಚಿತ ಲೇಖನಿ ಸಾಮಗ್ರಿ... ಹೀಗೆ ಈ ಶಾಲೆಯಲ್ಲಾದ ಚಮತ್ಕಾರಗಳ ಪಟ್ಟಿ ಉದ್ದವಾಗುತ್ತಲೇ  ಹೋಗುತ್ತದೆ.

2006ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತ ದರ್ಜೆಗೇರಿತು. ಈಗ  ನಾಲ್ಕು ಶಿಕ್ಷಕರಿದ್ದಾರೆ. ಆಂಗ್ಲ ಭಾಷೆಯಲ್ಲಿ ಸಂಭಾಷಣೆ ನಡೆಸುವಷ್ಟು ಇಲ್ಲಿನ ಮಕ್ಕಳು ಸಶಕ್ತರಾಗಿದ್ದಾರೆ. ಈ ಶಾಲೆಯ ವಿದ್ಯಾರ್ಥಿ ತಂಡ ಬೆಟ್ಟಗುಡ್ಡಗಳ ಜೀವ ವೈವಿದ್ಯ ಕುರಿತು ನಡೆಸಿದ ವೈಜ್ಞಾನಿಕ ಸಂಶೋಧನಾ ಪ್ರಬಂಧಕ್ಕೆ ರಾಷ್ಟ್ರೀಯ ಬಾಲ ವಿಜ್ಞಾನಿ ಪ್ರಶಸ್ತಿ, 2010-11ರಲ್ಲಿ ತಾಲ್ಲೂಕಿನ ಉತ್ತಮಶಾಲೆ ಪ್ರಶಸ್ತಿ ಸಂದಿದೆ. ಶಿಕ್ಷಕ ಶಿವಶಂಕರ್  ಬ್ರಿಟಿಷ್ ಕೌನ್ಸಿಲ್‌ಗೆ ಆಯ್ಕೆಗೊಂಡು ಶಾಲಾ ಹಂತದಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ ಪಡೆದು ಈಗ ಮಾರ್ಗದರ್ಶಕ ಶಿಕ್ಷಕರಾಗಿದ್ದಾರೆ.

ಅಂದಿನ ಶಾಲೆ ಸ್ಥಿತಿ ನೆನದರೆ ಮೈ ನಡುಕ ಬರುತ್ತದೆ. ವರ್ಗಾವಣೆ ಆಲೋಚನೆಯೂ ಬಂದಿತ್ತು. ಆದರೆ ಆಂತರ್ಯದಲ್ಲಿನ ಧೈರ್ಯ ಈ ಶಾಲೆ ಅಭಿವೃದ್ಧಿಗೆ ಪ್ರೇರಕ. ತನ್ನ ಮಗಳು ಕೂಡ ಈಗ ಇದೇ ಶಾಲೆ ವಿದ್ಯಾರ್ಥಿ ಎನ್ನುವಾಗ ಶಿವಶಂಕರ್ ಮೊಗದಲ್ಲಿ ಮಂದಹಾಸ.
 

ಒಂದು ಸಾವಿರ ಮನೆ ನೆಲಸಮ ಭೀತಿ

ಮಧುಗಿರಿ: ತುಮಕೂರು- ರಾಯದುರ್ಗ ಮಾರ್ಗವಾಗಿ ನಿರ್ಮಾಣವಾಗುತ್ತಿರುವ ನೂತನ ರೈಲ್ವೆ ಯೋಜನೆಯಿಂದ ಪಟ್ಟಣದ 23 ನೇ ವಾರ್ಡ್ ಸೇರಿದಂತೆ ಸುಮಾರು ಸಾವಿರ ಮನೆಗಳು ನೆಲಸಮವಾಗುತ್ತವೆ ಎಂದು ಪುರಸಭಾಧ್ಯಕ್ಷ ಎಂ.ಕೆ. ನಂಜುಂಡಯ್ಯ ಆತಂಕ ವ್ಯಕ್ತ ಪಡಿಸಿದರು.
ಪಟ್ಟಣದ 23 ನೇ ವಾರ್ಡ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾರ್ಗ ಬದಲಾಯಿಸುವಂತೆ ಒತ್ತಾಯಿಸುವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪುರಸಭಾ ವ್ಯಾಪ್ತಿಯ 23 ನೇ ವಾರ್ಡ್‌ನ ಮಧ್ಯಭಾಗದಲ್ಲಿ ರೈಲ್ವೆ ಹಳಿಯು ಹಾದು ಹೋಗುವುದರಿಂದ ಗೌರಿಬಿದನೂರು  ರಸ್ತೆಯಿಂದ ಪ್ರಾರಂಭವಾಗಿ ಗುರುವಡೇರಹಳ್ಳಿ ಸರ್ವೆ ನಂ. 5, 7, 8, 9, 23, 24, 25, 30, 31, 33, 35, 36, 39 ಹಾಗೂ ಅಗಸರಹೊಳೆಯಿಂದ ಶಾಂತಲಾ ಟಾಕೀಸ್, ತಾಲ್ಲೂಕು ಕಚೇರಿ ಹಿಂಭಾಗದಿಂದ ಕಾರಮರಡಿ ಮೂಲಕ ಪಾವಗಡ ರಸ್ತೆ ತಲುಪುವ ಸೂಚನೆಗಳಿವೆ.

ಇದರಿಂದ ಸುಮಾರು ಸಾವಿರ ಮನೆಗಳು ಹಾಗೂ ಭೂ ಪರಿವರ್ತನೆಗೊಂಡಿರುವ 500 ಕ್ಕೂ ಹೆಚ್ಚು ನಿವೇಶನಗಳು ಬಲಿಯಾಗಲಿವೆ. ಇದನ್ನು ತಪ್ಪಿಸಲು ಪಟ್ಟಣದ ಹೊರವಲಯದ ಮೂಲಕ ರೈಲ್ವೆ ಹಳಿ ನಿರ್ಮಿಸಬೇಕು ಒತ್ತಾಯಿಸಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಾಂಡುರಂಗಾರೆಡ್ಡಿ, ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಪುರಸಭಾ ಸದಸ್ಯರು ಹಾಗೂ  ಎಲ್ಲಾ ರಾಜಕೀಯ ಮುಖಂಡರು ನೇತೃತ್ವದಲ್ಲಿ ಸುಮಾರು 100 ಜನರ ನಿಯೋಗವು ಕೇಂದ್ರದ ರೈಲ್ವೆ ರಾಜ್ಯ ಸಚಿವ ಮುನಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಪುರಸಭಾ ಸದಸ್ಯರಾದ ಚಂದ್ರಶೇಖರ್‌ಬಾಬು, ಗೋವಿಂದರಾಜು, ಮುಖಂಡರಾದ ಬಸವರಾಜು , ಕೆ.ರಂಗನಾಥ್, ಚಂದ್ರು ಇನ್ನಿತರರು ಇದ್ದರು.

ಡಿಸೆಂಬರ್ ಅಂತ್ಯಕ್ಕೆ ಕೆರೆ ಕಾಮಗಾರಿ ಪೂರ್ಣ


ತುಮಕೂರು: ನಗರದ ಅಮಾನಿಕೆರೆ ಅಭಿವೃದ್ಧಿ ಕಾಮಗಾರಿ ಡಿ. 30ರ ಒಳಗೆ ಪೂರ್ಣಗೊಳ್ಳಲಿದೆ ಎಂದು ಕಾನೂನು ಹಾಗೂ ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.

ಅಮಾನಿಕೆರೆ ಕಾಮಗಾರಿಯನ್ನು ಸೋಮವಾರ ಪರಿಶೀಲಿಸಿ ಮಾತನಾಡಿದ ಅವರು ಡಿ. 15ರಿಂದ ಹೇಮಾವತಿ ನಾಲೆಯ ನೀರನ್ನು ಕೆರೆಗೆ ಹರಿಸಲಾಗುವುದು. ಜ. 26ರಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಕೆರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

ಈ ಬಾರಿ ಯಾವುದೇ ಕಾರಣಕ್ಕೂ ತಡವಾಗಬಾರದು. ಸಮಯಕ್ಕೆ ಸರಿಯಾಗಿ ಕೆಲಸಗಳು ಪೂರ್ಣಗೊಳ್ಳಬೇಕು. ತುಮಕೂರು ಜನತೆಗೆ ಸುಂದರ ಅಮಾನಿಕೆರೆಯನ್ನು ಕೊಡುಗೆಯಾಗಿ ನೀಡುವುದು ಸರ್ಕಾರದ ಆಶಯಗಳಲ್ಲಿ ಒಂದು ಎಂದು ಹೇಳಿದರು.

ಮುಖ್ಯ ಎಂಜಿನಿಯರ್ ನೀಡಿದ್ದ ತಪ್ಪು ಮಾಹಿತಿಯಿಂದಾಗಿ ಕೆರೆ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದೆ. ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಅಗತ್ಯ ಮಾಹಿತಿ ಪಡೆದ ನಂತರ ನನ್ನ ಅಭಿಪ್ರಾಯ ಬದಲಾಗಿದೆ ಎಂದು ಸಂಸದ ಬಸವರಾಜ್ ಸ್ಪಷ್ಟಪಡಿಸಿದರು.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತೆರಳುವ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ವೈಷ್ಣೋದೇವಿ ದರ್ಶನ ಪಡೆದ ಬಳಿಕ ಪ್ರಚಾರಕ್ಕೆ ತೆರಳುವುದಾಗಿ ಈ ಹಿಂದೆ ಯಡಿಯೂಪ್ಪ ಹೇಳಿದ್ದರು. ಅದರಂತೆ ನಡೆದುಕೊಳ್ಳುತ್ತಾರೆ ಎಂದು ಸುರೇಶ್‌ಕುಮಾರ್ ತಿಳಿಸಿದರು.

ಶಾಸಕ ಎಸ್.ಶಿವಣ್ಣ, ಟೂಡಾ ಅಧ್ಯಕ್ಷ ಶ್ರೀಧರಮೂರ್ತಿ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಟೂಡಾ ಆಯುಕ್ತ ಆದರ್ಶ್‌ಕುಮಾರ್ ಉಪಸ್ಥಿತರಿದ್ದರು.

Wednesday 2 November 2011

TUMKUR ILLEGAL MINING


The Central Empowered Committee appointed by the Supreme Court has extensively brought to the fore instances of illegal mining.

The final report of the committee led by P V Jayakrishnan, also constituted by the Supreme Court, has also laid bare the irregularities.

Of the 10,597 sq km of geographical expanse of the district, 1,117.11 sq km is forest land.

However, according to a forest survey conducted by the Central government in 2005, only 552 sq km of forest land remains. The extent of dense forest is only 62 sq km.

Also, 94.45 per cent of the total dense forest expanse is on the verge of extinction. As many as 55 companies had been granted mining lease on 2,678.97 hectares.

Of these, 24 were involved in mining on an area of 1203.10 hectares (including 257.37 hectares of forest land).

The companies produced only 2.3 lakh metric tonnes of iron ore in 2001-02. In 2008-09, 25.30 lakh metric tonnes were mined. A survey had been conducted by a team of officials of the revenue, forest, mines and geology departments in 2010. The survey revealed that there was illegal mining by 12 companies, by violating mining leases, on 120 acres of government land.

Renewal of lease

They have mined 1,291 million metric tonnes of ore in violation of rules. In November 2009, the deputy conservator of forests had written to the secretary of the mines department regarding the wrongdoings of nine mining companies. The report recommends that the leases of these firms be cancelled and that they seek renewal under Forest Conservation Act.

The Principal Conservator of Forests wrote to the Mines and Geology Department Commissioner on March 24, 2008, that action be taken against officials who allowed some of the companies to conduct mining in forest and gomala lands. But no action was taken.

The wastes from the mining area were spilt outside the lease area, besides polluting water bodies in the vicinity. Illegal mining has had an adverse effect on crops, besides causing sound pollution. The report recommends a resurvey like in Bellary.